ನವದೆಹಲಿ: ತ್ರಿಶೂರ್ ಜಿಲ್ಲೆಯ ಪಲಿಯೆಕ್ಕರ ಪ್ಲಾಜಾದಲ್ಲಿ ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸುವ ಕೇರಳ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್, ಅಪೂರ್ಣ, ಹೊಂಡಗಳಿಂದ ಕೂಡಿದ ಅಥವಾ ಸಂಚಾರ ದಟ್ಟಣೆಯಿಂದ ಸಂಚಾರಕ್ಕೆ ಯೋಗ್ಯವಲ್ಲದ ಹೆದ್ದಾರಿಗಳಲ್ಲಿ ಪ್ರಯಾಣಿಕರನ್ನು ಟೋಲ್ ಪಾವತಿಸಲು ಒತ್ತಾಯಿಸಲಾಗುವುದಿಲ್ಲ ಎಂದು ತೀರ್ಪು ನೀಡಿದೆ.
ಎಡಪ್ಪಳ್ಳಿ-ಮನ್ನುತಿ ನಡುವಿನ 65 ಕಿ.ಮೀ. ಹೆದ್ದಾರಿಯಲ್ಲಿ ಕಳೆದ ವಾರ 12 ತಾಸುಗಳ ಕಾಲ ವಾಹನದಟ್ಟಣೆಯಾಗಿತ್ತು. ಈ ವೇಳೆ ನಿಂತಲ್ಲೇ ನಿಂತಿದ್ದ ಪ್ರಯಾಣಿಕರು, 150 ರು. ಸುಂಕವನ್ನು ಕಟ್ಟಬೇಕಾಗಿಲ್ಲ ಎಂದು ಆ.6ರಂದು ಹೈಕೋರ್ಟ್ ಹೇಳಿತ್ತು. ಇದನ್ನು ಪ್ರಶ್ನಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್ಎಚ್ಎಐ) ಸುಪ್ರೀಂ ಕೋರ್ಟ್ನ ಕದ ತಟ್ಟಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾ| ಬಿ.ಆರ್. ಗವಾಯಿ, ನ್ಯಾ| ಕೆ ವಿನೋದ್, ಎನ್.ವಿ. ಅಂಜಾರಿಯಾ ಅವರ ಪೀಠ, ಸುಂಕ್ ವಸೂಲಾತಿಯಾಗದಿದ್ದರೆ ಆಗುವ ನಷ್ಟಕ್ಕಿಂತ ಸಾರ್ವಜನಿಕರ ಹಿತಕ್ಕೇ ಪ್ರಾಮುಖ್ಯತೆ ನೀಡಿ ಆದೇಶ ಹೊರಡಿಸಿದೆ. 'ನಾಗರಿಕರು ಈಗಾಗಲೇ ತೆರಿಗೆ ಪಾವತಿಸಿರುವ ರಸ್ತೆಗಳಲ್ಲಿ ಮುಕ್ತವಾಗಿ, ಗಟಾರ, ಗುಂಡಿ ತುಂಬಿದ ರಸ್ತೆಯಲ್ಲಿ ಸಂಚರಿಸಲಿ' ಎಂದು ಖಾರವಾಗಿ ಹೇಳಿದೆ. ಈ ಮಾರ್ಗದಲ್ಲಿ ಟೋಲ್ ಪಾವತಿಯನ್ನು 4 ವಾರ ಅಥವಾ ಪರಿಸ್ಥಿತಿ ಸುಧಾರಿಸುವ ತನಕ ಜಾರಿಯಲ್ಲಿ ಇಡಲಾಗುವುದು.