image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಭಾರತದ ಮೇಲೆ ಅಮೆರಿಕ ಟ್ಯಾರಿಫ್ ಹಾಕಲು ಆಪರೇಷನ್ ಸಿಂದೂರ್ ಕಾರಣವಾಯಿತು : ಆರ್​ಬಿಐ ಗವರ್ನರ್ ರಘುರಾಮ್ ರಾಜನ್

ಭಾರತದ ಮೇಲೆ ಅಮೆರಿಕ ಟ್ಯಾರಿಫ್ ಹಾಕಲು ಆಪರೇಷನ್ ಸಿಂದೂರ್ ಕಾರಣವಾಯಿತು : ಆರ್​ಬಿಐ ಗವರ್ನರ್ ರಘುರಾಮ್ ರಾಜನ್

ನವದೆಹಲಿ : ಭಾರತದ ಮೇಲೆ ಅಮೆರಿಕ ಶೇ. 50ರಷ್ಟು ಟ್ಯಾರಿಫ್ ಹಾಕಿರುವುದು ಬಹಳಷ್ಟು ಅಂತಾರಾಷ್ಟ್ರೀಯ ರಾಜಕೀಯ ತಜ್ಞರಿಗೆಯೇ ಅಚ್ಚರಿ ಮೂಡಿಸಿದೆ. ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡಿಲ್ಲವೆಂದು, ಹಾಗೂ ರಷ್ಯಾದ ತೈಲವನ್ನು ಖರೀದಿಸಲಾಗುತ್ತಿದೆ ಎಂದೂ ಕಾರಣ ನೀಡಿ ಭಾರತದ ಮೇಲೆ ಡೊನಾಲ್ಡ್ ಟ್ರಂಪ್ ಶೇ.50ರಷ್ಟು ಸುಂಕ ಹೇರಿದ್ದಾರೆ. ಆದರೆ, ಆರ್ಥಿಕ ತಜ್ಞ ಹಾಗೂ ಮಾಜಿ ಆರ್​ಬಿಐ ಗವರ್ನರ್ ರಘುರಾಮ್ ರಾಜನ್ ಪ್ರಕಾರ, ಭಾರತದ ಮೇಲೆ ಅಮೆರಿಕ ಟ್ಯಾರಿಫ್ ಹಾಕಲು ಬೇರೆಯೇ ಕಾರಣವಿದೆ. ಸ್ವಿಟ್ಜರ್​ಲ್ಯಾಂಡ್​ನ ಜೂರಿಚ್ ಯೂನಿವರ್ಸಿಟಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ರಘುರಾಮ್ ರಾಜನ್, ಭಾರತದ ಮೇಲೆ ಅಮೆರಿಕ ಟ್ಯಾರಿಫ್ ಹಾಕಲು ಆಪರೇಷನ್ ಸಿಂದೂರ್ ಕಾರಣವಾಯಿತು ಎಂದಿದ್ದಾರೆ. 

 ಭಾರತವು ಈ ರೀತಿ ವಾದ ಮಾಡಿ ತಪ್ಪು ಮಾಡಿರಬಹುದು. ಡೊನಾಲ್ಡ್ ಟ್ರಂಪ್ ಹೇಳಿದ್ದನ್ನು ಒಪ್ಪಿದ ಪಾಕಿಸ್ತಾನಕ್ಕೆ ಶೇ. 19ರಷ್ಟು ಟ್ಯಾರಿಫ್ ಸಿಕ್ಕಿತು. ಟ್ರಂಪ್ ಹೇಳಿಕೆ ನಿರಾಕರಿಸಿದ ಭಾರತಕ್ಕೆ ಶೇ. 50ರಷ್ಟು ಟ್ಯಾರಿಫ್ ಸಿಕ್ಕಿತು. ಪಾಕಿಸ್ತಾನ ಸರಿಯಾಗಿ ಪರಿಸ್ಥಿತಿ ನಿಭಾಯಿಸಿತು ಎಂದಿದ್ದಾರೆ. 'ರಷ್ಯನ್ ತೈಲದ ಸಮಸ್ಯೆ ಅಲ್ಲ ಅದು. ವ್ಯಕ್ತಿತ್ವಗಳ ವಿಷಯ ಮುಖ್ಯವಾಗಿತ್ತು. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಕೊನೆಗೊಳ್ಳಲು ತಾನು ಕಾರಣ ಎಂದು ಟ್ರಂಪ್ ಹೇಳಿಕೊಂಡಿದ್ದರು. ಅದಾದ ಬಳಿಕ ಭಾರತ ಮಾಡಿದ ಕೆಲ ಪ್ರತಿಕ್ರಿಯೆಗಳನ್ನು ಶ್ವೇತಭವನದಲ್ಲಿರುವವರು ಹೇಗೆ ಸ್ವೀಕರಿಸಿದರು ಎಂಬುದು ಸಮಸ್ಯೆ. ಇದೆಲ್ಲವೂ ಟ್ರಂಪ್​ರಿಂದಾಗಿಯೇ ಎಂದು ಹೇಳಿ ಪಾಕಿಸ್ತಾನ ಸರಿಯಾಗಿ ಪರಿಸ್ಥಿತಿ ನಿರ್ವಹಿಸಿತು' ಎಂದು ಮಾಜಿ ಆರ್​ಬಿಐ ಗವರ್ನರ್ ಹೇಳಿದ್ದಾರೆ. ರಘುರಾಮ್ ರಾಜನ್ ಮಾತನಾಡಿರುವ ಈ ಮಾತುಗಳಿರುವ ಕ್ಲಿಪ್ ವೈರಲ್ ಆಗಿದೆ. ಡಿಸೆಂಬರ್ 4ರಂದು ಇದು ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಆಗಿದೆ. ಸ್ವಿಟ್ಜರ್​ಲ್ಯಾಂಡ್​ನಲ್ಲಿನ ಈ ಕಾರ್ಯಕ್ರಮ ಯಾವಾಗ ನಡೆದಿದೆ ನಿಖರವಾಗಿ ಗೊತ್ತಾಗಿಲ್ಲ. ರಘುರಾಮ್ ರಾಜನ್ ಅವರು, ಭಾರತ ಹಾಗೂ ಅಮೆರಿಕದ ನಾಯಕರ ನಡುವೆ ಸೌಹಾರ್ದತೆ ಮೂಡಿ, ಉತ್ತಮ ಒಪ್ಪಂದಗಳು ಏರ್ಪಡುವಂತಾಗಲಿ ಎಂದು ಈ ಕ್ಲಿಪ್​ನಲ್ಲಿ ಆಶಿಸಿದ್ದಾರೆ.

Category
ಕರಾವಳಿ ತರಂಗಿಣಿ