ಅಸ್ಸೋಂ : ಮಹತ್ತರ ಬೆಳವಣಿಗೆಯೊಂದರಲ್ಲಿ ಅಸ್ಸೋಂನ ಉಗ್ರ ಸಂಘಟನೆ ಉಲ್ಫಾ ಐ ಸಂಘಟನೆಯ ಕೆಲವರು ಸೇರಿದಂತೆ ಮ್ಯಾನ್ಮಾರ್ ಮೂಲದ ಬಂಡುಕೋರರ ಕ್ಯಾಂಪ್ ಮೇಲೆ ದ್ರೋನ್ ಮತ್ತು ಕ್ಷಿಪಣಿ ದಾಳಿ ನಡೆದಿದೆ ಎಂದು ವರದಿಯಾಗಿದೆ. ಈ ದಾಳಿಗೆ ಸಂಬಂಧಿಸಿದಂತೆ ಭಾರತೀಯ ಸೇನೆಯಿಂದ ಯಾವುದೇ ಹೇಳಿಕೆ ಹೊರಬಿದ್ದಿಲ್ಲ. ಅಸ್ಸೋಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಕೂಡ ಅಸ್ಸೋಂ ರಾಜ್ಯದಿಂದ ಈ ದಾಳಿ ನಡೆದಿಲ್ಲವೆಂದು ಹೇಳಿದ್ದಾರೆ. ಆದ್ರೆ ಉಲ್ಫಾ ಸ್ವತಂತ್ರ ಉಗ್ರ ಸಂಘಟನೆ ಮಾತ್ರ ಭಾರತೀಯ ಸೇನೆಯಿಂದ ಈ ನಡೆಸಲಾಗಿದೆ ಎಂದು ಆರೋಪಿಸಿದೆ.
ಈ ದ್ರೋನ್ ದಾಳಿ ಭಾನುವಾರ ಬೆಳಗಿನಜಾವ (ಜುಲೈ 13) ಇಂಡಿಯಾ-ನಾಗಾಲ್ಯಾಂಡ್-ಮ್ಯಾನ್ಮಾರ್ ಅಂತಾರಾಷ್ಟ್ರೀಯ ಗಡಿಯ ಬಳಿಯ ಪಾಂಗಸೌ ಪಾಸ್ ಮ್ಯಾನ್ಮಾರ್ ಗಡಿಯಲ್ಲಿ ನಡೆದಿದೆ. ಉಲ್ಫಾ -I ಮತ್ತು RPF/PLA ಗುರಿಯಾಗಿಸಿಕೊಂಡು ದಾಳಿ ನಡೆದಿದ್ದು, ಇದರಿಂದ ಬಂಡುಕೋರ ಸಂಘಟನೆಗಳ ಉನ್ನತ ಶ್ರೇಣಿಯಲ್ಲಿದ್ದ ಲೆಫ್ಟಿನೆಂಟ್ ಜನರಲ್ ರ್ಯಾಂಕ್ ನಯಾನ್ಅಸೊಮ್, ಗಣೇಶ್ ಅಸೊಮ್, ಮತ್ತು ಪ್ರದೀಪ್ ಅಸೊಮ್ ಹತ್ಯೆಗೀಡಾಗಿದ್ದಾರೆ. ಅಲ್ಲದೆ, ಹಲವು ಸಂಘಟನೆಗಳ ಸದಸ್ಯರು ಗಾಯೊಂಡಿರುವ ಬಗ್ಗೆ ವರದಿಯಾಗಿದೆ.
ಉಲ್ಫಾ ಐ ಉಗ್ರ ಸಂಘಟನೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಭಾನುವಾರ ನಡೆದ ಈ ದಾಳಿಯಲ್ಲಿ ತಮ್ಮ ಸಂಘಟನೆಯ ಮೂವರು ಸದಸ್ಯರು ಹತರಾಗಿರುವ ಬಗ್ಗೆ ತಿಳಿಸಿದೆ. ಎರಡನೇ ಲೆಫ್ಟಿನೆಂಟ್ ಕಮಾಂಡರ್ ಇಶಾನ್ ಅಸೊಮ್, ಉಲ್ಫಾ ಸಂಘಟನೆ ಸಹಾಯಕ ಕಾರ್ಯದರ್ಶಿಯ ಮಾಧ್ಯಮ ಪ್ರಕಟಣೆ ಪ್ರಕಾರ, ಭಾರತೀಯ ಸೇನೆಯೇ ಈ ದಾಳಿ ನಡೆಸಿದೆ ಎಂದು ದೂರಿದ್ದಾರೆ. '' ಜುಲೈ 13, 2025 ರಂದು ನಸುಕಿನಜಾವ 2 ಗಂಟೆಯಿದ 4 ಗಂಟೆಯ ಮಧ್ಯೆ ಭಾರತೀಯ ಸೇನೆ ಅಚ್ಚರಿ ನೀಡುವ ಸಲುವಾಗಿ ಇಸ್ರೇಲ್ ಮತ್ತು ಫ್ರಾನ್ಸ್ ನಿರ್ಮಿತ ದ್ರೋನ್ಗಳಿಂದ ಉನೈಟೆಡ್ ಲಿಬರೇಷನ್ ಫ್ರಂಟ್ ಅಸ್ಸೋಂ (ಸ್ವತಂತ್ರ) ಮತ್ತು ಆರ್ಪಿಎಫ್ /ಪಿಎಲ್ಎ ನಾಗಾಲ್ಯಾಂಡ್ -ಮ್ಯಾನ್ಮಾರ್ ಅಂತಾರಾಷ್ಟ್ರೀಯ ಗಡಿಯಿಂದ ಲೊಂಗವಾ ಕಡೆಯಿಂದ ಅರುಣಾಚಲ-ಮ್ಯಾನ್ಮಾರ್ ಬಳಿಯ ಪಾಂಗಸೌ ಪಾಸ್ ಬಳಿ ನಡೆದಿದೆ.
ULFA-I ಹೇಳಿರುವ ಪ್ರಕಾರ, 150ಕ್ಕೂ ಹೆಚ್ಚು ದ್ರೋನ್ಗಳ ಮೂಲಕ ಬಾಂಬ್ ದಾಳಿ ತಮ್ಮ ಕ್ಯಾಂಪ್ಗಳ ಮೇಲೆ ನಡೆದಿದೆ. ಈ ವೇಳೆ ಲೆಫ್ಟಿನೆಂಟ್ ಜನರಲ್ ನಯಾನ್ ಅಸೊಮ್, ಸಂಘಟನೆಯ ಲೋವರ್ ಕೌನ್ಸಿಲ್ ಅಧ್ಯಕ್ಷ ಹತನಾಗಿದ್ದರೆ, ಉಳಿದಂತೆ 19 ಅಧಿಕಾರಿಗಳು ಅಥವಾ ಸದಸ್ಯರು ಗಾಯಗೊಂಡಿದ್ದಾರೆ. 1990 ರಲ್ಲೇ ಭಾರತದಿಂದ ನಿಷೇಧಕ್ಕೊಳಗಾಗಿರುವ ಉಲ್ಫಾ ಸಂಘಟನೆಯನ್ನು ನಯಾನ್ ಅಸೊಮ್ ಸೇರಿದ್ದ.
ಈ ದಾಳಿಗೆ ಸಂಬಂಧಿಸಿದಂತೆ ಎರಡನೇ ಪ್ರಕಟಣೆ ಹೊರಡಿಸಿರುವ ಉಲ್ಫಾ ಐ, "ಹತನಾದ ತಮ್ಮ ಸಂಘಟನೆಯ ಲೆಫ್ಟಿನೆಂಟ್ ಜನರಲ್ ನಯಾನ್ ಅಸೊಮ್ ಅಂತ್ಯಕ್ರಿಯೆ ನಡೆಯುವಾಗ ಮತ್ತೊಂದು ಬಾರಿ ಕ್ಷಿಪಣಿ ದಾಳಿ ನಡೆಯಿತು. ಈ ವೇಳೆ ಬ್ರಿಗೇಡಿಯರ್ ಗಣೇಶ್ ಅಸೊಮ್, ಕರ್ನಲ್ ಪ್ರದೀಪ್ ಅಸೊಮ್ ಹತರಾದರು. ಅಲ್ಲದೆ, ಕೆಲ ಸದಸ್ಯರು ಮತ್ತು ಸಾಮಾನ್ಯ ನಾಗರಿಕರು ಗಾಯಗೊಂಡಿದ್ದಾರೆ. ನಿರ್ದಿಷ್ಟ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ" ಎಂದಿದ್ದಾರೆ.