image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕೇವಲ ಐದು ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸುವ ಮೂಲಕ ಗಮನ ಸೆಳೆದ ಶಿಕ್ಷಕ ಶರಣು ಮಂಕಣಿ

ಕೇವಲ ಐದು ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸುವ ಮೂಲಕ ಗಮನ ಸೆಳೆದ ಶಿಕ್ಷಕ ಶರಣು ಮಂಕಣಿ

ಲಿಂಗಸುಗೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತಮಗೆ ವಹಿಸಿದ್ದ ಮನೆಗಳನ್ನು ಕೇವಲ ಐದು ದಿನಗಳಲ್ಲಿ ಪೂರ್ಣಗೊಳಿಸುವ ಮೂಲಕ ತಾಲ್ಲೂಕಿನ ರಾಂಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ಶರಣು ಮಂಕಣಿ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಶಿಕ್ಷಕ ಶರಣು ಮಂಕಣಿ ಅವರಿಗೆ ತಾಲ್ಲೂಕಿನ ರಾಂಪುರ ಗ್ರಾಮದ 103 ಮನೆಗಳನ್ನು ನಿಗದಿಪಡಿಸಲಾಗಿತ್ತು. ಸೆ.23ರಂದು ಸಮೀಕ್ಷಾ ಕಾರ್ಯ ಆರಂಭಿಸಿದ ಅವರು, 103 ಮತ್ತು ಹೆಚ್ಚುವರಿ 10 ಸೇರಿ ಒಟ್ಟು 113 ಮನೆಗಳ ಸಮೀಕ್ಷೆಯನ್ನು ಸೆ.28ರಂದು ಪೂರ್ಣಗೊಳಿಸಿದ್ದಾರೆ.

ಶರಣು ಮಂಕಣಿ ಅವರನ್ನು ತಹಶೀಲ್ದಾರ್‌ ಸತ್ಯಮ್ಮ ಹಾಗೂ ಬಿಇಒ ಸುಜಾತ ಹೂನೂರು ಸನ್ಮಾನಿಸಿ ಅಭಿನಂದಿಸಿದ್ದಾರೆ. ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ನಿಗದಿತ ಅವಧಿಗಿಂತ ಮುಂಚಿತವಾಗಿ ಮುಗಿಸುವ ಮೂಲಕ ತಾಲ್ಲೂಕಿನ ಚಾಗಭಾವಿಯ ಶಿಕ್ಷಕ ಗುರುಮೂರ್ತಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕೇವಲ ಐದು ದಿನಗಳಲ್ಲಿ 78 ಕುಟುಂಬಗಳ ಸಮೀಕ್ಷೆಯನ್ನು ಅವರು ಪೂರ್ಣಗೊಳಿಸಿದ್ದಾರೆ. ತಾಲ್ಲೂಕು ಆಡಳಿತದ ವತಿಯಿಂದ ತಹಶೀಲ್ದಾರ್ ಅಶೋಕ ಪವಾರ್ ಗುಗುರುಮೂರ್ತಿ ಅವರನ್ನು ಸನ್ಮಾನಿಸಿದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರೀಫ್ ಮಿಯಾ ಚಾಗಭಾವಿ, ಪಿಎಸ್‌ಐ ವೆಂಕಟೇಶ ನಾಯಕ, ಸಮೀಕ್ಷೆಯ ಜಿಲ್ಲಾ ತರಬೇತುದಾರ ಗುರು ಹಿರೇಮಠ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಾವೀದ್ ಪಾಷಾ, ಜಿಪಿಟಿ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ, ಸಿಆರ್‌ಪಿಗಳಾದ ಮಹೇಶ, ವೆಂಕಟೇಶ, ಶಿಕ್ಷಕರಾದ ಚನ್ನವೀರಯ್ಯಸ್ವಾಮಿ, ಅಕ್ಷಯ್ ಹಾಗೂ ಅಮರೇಶ ಇದ್ದರು.

Category
ಕರಾವಳಿ ತರಂಗಿಣಿ