ಮಂಗಳೂರು: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಸಾರ್ವಜನಿಕರಲ್ಲಿ ಸಂವಿಧಾನದ ಕುರಿತು ಅರಿವು ಮೂಡಿಸಲು ಸೆಪ್ಟೆಂಬರ್ 14 ರಂದು ಬೈಕ್ ಜಾಥಾವು ಬೆಳಿಗ್ಗೆ 10 ಗಂಟೆಗೆ ಕದ್ರಿ ಉದ್ಯಾನವನದಿಂದ ಬೆಂಗಳೂರಿಗೆ ಹೊರಡಲಿದೆ.
ಸೆಪ್ಟೆಂಬರ್ 15 ರಂದು "ಸೈಕಲ್ ಜಾಥಾ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಬೆಳಿಗ್ಗೆ 7 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನಿಂದ ಲೇಡಿಹಿಲ್-ಲಾಲ್ಭಾಗ್-ಪಿ.ವಿ.ಎಸ್ ಸರ್ಕಲ್-ನವಭಾರತ್ ಸರ್ಕಲ್-ಸಿಟಿ ಸೆಂಟರ್-ಹಂಪನಕಟ್ಟೆ ಮಾರ್ಗವಾಗಿ ಕುದ್ಮುಲ್ ರಂಗರಾವ್ ಪುರಭವನದವರೆಗೆÀ ನಡೆಯಲಿರುತ್ತದೆ. ಪುರಭವನದಲ್ಲಿ ಬೆಳಿಗ್ಗೆ 7.30 ಗಂಟೆಗೆ ನಡೆಯುವ ಕಾರ್ಯಕ್ರಮಕ್ಕೆ ನಾಗರಿಕರು, ಅಧಿಕಾರಿ/ಸಿಬ್ಬಂದಿಗಳು ಭಾಗವಹಿಸಲು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ